Showing posts with label ಸ್ಮರಿಸಿರೊ ನಮ್ಮ ನರನ ಸಾರಥಿಯ others. Show all posts
Showing posts with label ಸ್ಮರಿಸಿರೊ ನಮ್ಮ ನರನ ಸಾರಥಿಯ others. Show all posts

Friday, 10 September 2021

ಸ್ಮರಿಸಿರೊ ನಮ್ಮ ನರನ ಸಾರಥಿಯ ankita others

 ಶ್ರೀ ತುಪಾಕಿ ವೆಂಕಟರಮಣಾಚಾರ್ಯರ ಕೃತಿ

ರಾಗ - : ತಾಳ -


ಸ್ಮರಿಸಿರೊ ನಮ್ಮ ನರನ ಸಾರಥಿಯ

ಪರಿಹರಿಸುವನು ತಾಪತ್ರಯ ವ್ಯಥೆಯ ll ಪ ll


ರಣಮಂಡಲದಲ್ಲಿ ಗುಣುಗುವ ಕುಂತಿಯ

ತನುಜನ ನೋಡುತ ವಿನಯದಿಂದ

ಘನತತ್ವವನು ಪೇಳಿ ಅಣುಮಹದ್ಗತ

ವಿಶ್ವ-

ತನುವ ತೋರಿದ ಸತ್ಯ ವಿನಯ ಶ್ರೀ ಕೃಷ್ಣನ ll 1 ll


ಸುರನದೀ ತನುಜನ ಶರದಿಂದ ರಕ್ತದ

ಸುರಿವಂದ ತೋರಿ ಶ್ರೀಕರ ಚಕ್ರವ

ಧರಿಸಿ ಓಡುತ ತನ್ನ ಚರಣ ಸೇವಕನೆಂಬ

ಹರುಷ ತಾಳಿ ಬೇಗ ತಿರುಗಿ ಬಂದವನ ll 2 ll


ವಿಜಯ ಸಾರಥಿಯೆಂದು ಭಜಿಸುವ ದಾಸರ

ವಿಜಯ ಪೊಂದಿಸುವನಂಡಜ ರಾಜಗಮನ

ಅಜ ಭವವರದ ಕಂಬುಜನಾಭ ಕಮಲೇಶ

ಭುಜಗ ಧರಾಧೀಶ ಭಜನೀಯಪಾದನ ll 3 ll

***