Showing posts with label ಪಾಹಿ ಶ್ರೀ ನರಸಿಂಹ ಪ್ರಿಯ ಶನೈಶ್ಚರನೆ ನಮೋ ಸಂತತ prasannavenkata. Show all posts
Showing posts with label ಪಾಹಿ ಶ್ರೀ ನರಸಿಂಹ ಪ್ರಿಯ ಶನೈಶ್ಚರನೆ ನಮೋ ಸಂತತ prasannavenkata. Show all posts

Tuesday 1 June 2021

ಪಾಹಿ ಶ್ರೀ ನರಸಿಂಹ ಪ್ರಿಯ ಶನೈಶ್ಚರನೆ ನಮೋ ಸಂತತ ankita prasannavenkata

 " ಶ್ರೀ  ಪ್ರಸನ್ನ ಶ್ರೀನಿವಾಸ ದಾಸರ ಕಣ್ಣಲ್ಲಿ ಶ್ರೀ ಶನಿ ಮಹಾತ್ಮ "

ಪಾಹಿ ಶ್ರೀ ನರಸಿಂಹ ಪ್ರಿಯ -

ಶನೈಶ್ಚರನೆ ನಮೋ ಸಂತತ ।

ಪಾಹಿ ನಮೋ ಗ್ರಹರಾಜಶೌರಿ -

ಮಹೇಶ್ವರನೇ ಕೃಪಾಕರ ।। ಪಲ್ಲವಿ ।।

ಪೃಥ್ವೀ ತತ್ತ್ವಾಭಿಮಾನಿಯೇ ನಮೋ - 

ಕರ್ಮಪನು ಎಂಬ ಪುಷ್ಕರನು ।

ಮತ್ತು ಅಜಾನಜರು ಋಷಿ -

ಗಂಧರ್ವ ಮಹಾ ಸಮುದಾಯಕೆ ।।

ಮೇದಿನಿ ರಾಜರು ಮನುಷ್ಯರೂ -

ಸರ್ವರಿಗೂ ಗುರು ಈಶ್ವರ ।

ನೀ ದಯದಿ ಹರಿದಾಸರನ್ನ -

ಸಲಹುತಿಯೋ ಶರಣೆಂಬೆ ।। ಚರಣ ।।

ಸೂರ್ಯ ಛಾಯಾ ಸೂನು -

ಕಾಲ ರೂಪಿ ಮಹಾ ಗ್ರಹ ನಮೋ ।

ಕಾಯೋ ಜಟಿಲನೇ ವಜ್ರ ರೋಮನೆ -

ದಾನವರಿಗೆ ಭಯಂಕರ ।।

ತ್ರಯಂಬಕ ನಾರದರಿಗುಪದೇಶ -

ಕೊಂಡಾಡಿದ ನಿನ್ನನ್ನು ।

ಖ್ಯಾತ ರಘುವಂಶೋತ್ಥ ಅತಿ । ವಿ ।

ಖ್ಯಾತ ದಶರಥ ಕೀರ್ತಿತ ।। ಚರಣ ।।

ಜ್ಞಾನ ಚಕ್ಷುರ್ನಮಸ್ತೇಸ್ತು -

ಕಶ್ಯಪಾತ್ಮಜ ಸೂನವೇ ।

ತುಷ್ಟೋದದಾಸಿ ವೈರಾಜ್ಯ೦ -

ರುಷ್ಟೋ ಹರಸಿ ತಕ್ಷಣಾತ್ ।।

ನಿನ್ನನ್ನು ದಶರಥನು ಸ್ತುತಿಸಿ -

ನಮಿಸೆ ವರಗಳನಿತ್ತು ನೀ ।

ಕ್ಷೋಣಿ ಜನ ಸಂರಕ್ಷಣೆಗೆ ಬಗೆ -

ಪಾದ್ಮ ಉಕ್ತದಿ ಅರುಹಿದಿ ।। ಚರಣ ।।

ಗಂಗಾ ಮಹಿಮ ರಕ್ಷೋ ಭುವನ -

ಪ್ರಸ್ಥಾನೋಕ್ತವು ತ್ವತ್ ಕೃತ ।

ತುಂಗ ಮಹಿಮ ಶ್ರೀ ಲಕ್ಷ್ಮೀ -

ಭೂಮಾ ನಾರಸಿಂಹನ ಸ್ತೋತ್ರವು ।।

ರಾಘವ ಕೃತ ತ್ವತ್ ಕೃತ ಈ -

ನುಡಿಗಳ್ ಪಠಿಸಿ ಕೇಳ್ವರ್ಗೆ ।

ಶೋಕನೀಗಿ ಇಷ್ಟ ಲಭಿಸುವುದು -

ನೃಹರಿ ಪ್ರಿಯ ನೀ ಒದುಗುವಿ ।। ಚರಣ ।।

ವರಹುಹಾಸನನ ತಾತ -

ಪ್ರಸನ್ನ ಶ್ರೀನಿವಾಸ ನೃಕೇಸರಿ ।

ಘನ್ನ ದಯದಿ ಪ್ರಸನ್ನನಾಗಿ -

ಒಲಿಯೆ ಸಾಧನವಾಗುವ ।।

ಜ್ಞಾನ ಭಕ್ತಿ ವೈರಾಗ್ಯ ಸಂಪತ್ -

ಆಯುರಾರೋಗ್ಯ ಇತ್ತು ನೀ ।

ಎನ್ನ ತಪ್ಪುಗಳ ಮನ್ನಿಸಿ -

ಎನ್ನ ಪಾಹಿ ಸತತ ಶನೈಶ್ಚರ ।। ಚರಣ ।।

****