Showing posts with label ಎಂದು ಕಾಂಬುವೆ ಎನ್ನ ಸಲಹುವತಂದೆ prasannavenkata. Show all posts
Showing posts with label ಎಂದು ಕಾಂಬುವೆ ಎನ್ನ ಸಲಹುವತಂದೆ prasannavenkata. Show all posts

Friday 8 October 2021

ಎಂದು ಕಾಂಬುವೆ ಎನ್ನ ಸಲಹುವ ತಂದೆ ankita prasannavenkata ENDU KAAMBUVE ENNA SALHUVA TANDE



by ಪ್ರಸನ್ನವೆಂಕಟದಾಸರು
ಎಂದು ಕಾಂಬುವೆ ಎನ್ನ ಸಲಹುವ ತಂದೆ ಉಡುಪಿಯ ಜಾಣನಮಂದಹಾಸ ಪ್ರವೀಣನಇಂದಿರಾ ಭೂರಮಣನ ಪ.

ಕಡಲ ತಡಿಯೊಳು ಎಸೆವ ರಂಗನಕಡೆಗೋಲ ನೇಣ ಪಿಡಿದನಮೃಡಪುರಂದರಅಜರೊಡೆಯನ ಈರಡಿಗಳಲಿ ಶಿರ ಇಡುವೆ ನಾ 1

ದೇವಕಿಯ ಜಠರದಲ್ಲಿ ಬಂದನಆವಪಳ್ಳಿಯಲ್ಲಿ ನಿಂದನಮಾವ ಕಂಸನ ಕೊಂದನಕಾವನಯ್ಯಮುಕುಂದನ2

ಪೂರ್ಣಪ್ರಜÕರಿಗೊಲಿದು ದ್ವಾರಕೆಯಮಣ್ಣಿನೊಳು ಪ್ರಕಟಿಸಿದನ ಭವಾರ್ಣವಕೆ ಪ್ಲವನಾದನ ಪ್ರಸನ್ನವೆಂಕಟ ಕೃಷ್ಣನ 3
****


ಲಘುಟಿಪ್ಪಣಿ

 ಎಂದು ಕಾಂಬೆನು ಎನ್ನ ಸಲಹುವ
ತಂದೆ ಉಡುಪಿಯ ಜಾಣನ
 ಮಂದಹಾಸಪ್ರವೀಣನ
 ಇಂದಿರಾಭೂರಮಣನ ॥  ಪ ॥

 ಜಾಣನ = ಸರ್ವಜ್ಞನಾದ (ಉಡುಪಿ) ಶ್ರೀಕೃಷ್ಣನನ್ನು; ಮಂದಹಾಸಪ್ರವೀಣನ = (ಮಂದಹಾಸ)ಮುಗುಳ್ನಗೆಯಿಂದ ವಿವಿಧಭಾವಗಳನ್ನು ವಿವಿಧ ಜೀವರಿಗೆ ಸೂಚಿಸುವ ನಿಪುಣತೆಯುಳ್ಳವನನ್ನು; (ಶ್ರೀಕೃಷ್ಣನ ಮಂದಹಾಸವು ಸಂದರ್ಭವಿಶೇಷಬಲದಿಂದ ಭೀಮ - ಜರಾಸಂಧಾದಿ ವಿರುದ್ಧಸ್ವಭಾವದವರಿಗೆ ವಿವಿಧಭಾವದ್ಯೋತಕಗಳಾಗಿದ್ದು ವಿರುದ್ಧಫಲಗಳನ್ನೇ ದೊರಕಿಸಿದ, ಶ್ರೀಕೃಷ್ಣನ ಈ ಪ್ರಾವೀಣ್ಯದ ನಿದರ್ಶನಗಳು ಶ್ರೀಮನ್ಮಹಾಭಾರತದಲ್ಲಿ ಹೇರಳವಾಗಿ ದೊರೆಯುತ್ತವೆ); ಇಂದಿರಾಭೂರಮಣನ = ಶ್ರೀ (ಇಂದಿರಾ) ಭೂದೇವಿಯರ ರಮಣನಾದ ಶ್ರೀಕೃಷ್ಣನನ್ನು .

 ಕಡಲದಡದೊಳು ಎಸೆವ ರಂಗನ
ಕಡೆಗೋಲ್ನೇಣನು ಪಿಡಿದನ
 ಮೃಡ-ಪುರಂದರರೊಡೆಯನ ಈ -
ರಡಿಗಳಲಿ ಶಿರವಿಡುವೆ ನಾ ॥ 1 ॥

 ಕಡಲದಡದೊಳು = ಸಮುದ್ರದ ತೀರದಲ್ಲಿ (ಹತ್ತಿರ ಪ್ರದೇಶದಲ್ಲಿ); ಎಸೆವ = ವಿರಾಜಿಸುವ; ರಂಗನ = ಶ್ರೀಕೃಷ್ಣನನ್ನು; ಕಡೆಗೋಲ್ನೇಣನು = ಕಡೆಗೋಲು ಮತ್ತು ಹಗ್ಗವನ್ನು , ಪಿಡಿದನ =  (ಕೈಯಲ್ಲಿ)ಹಿಡಿದಿರುವ; ಮೃಡ - ಪುರಂದರರೊಡೆಯನ = ರುದ್ರೇಂದ್ರ ದೇವತೆಗಳ ಸ್ವಾಮಿಯಾದವನನ್ನು ; ಈರಡಿಗಳಲಿ = ಪಾದದ್ವಂದ್ವದಲ್ಲಿ ( ಎರಡು ಪಾದಗಳಲ್ಲಿ ) ;  ಶಿರವಿಡುವೆ = ತಲೆಯಿಟ್ಟು ನಮಸ್ಕರಿಸುತ್ತೇನೆ.

 ದೇವಕಿಯ ಜಠರದಲಿ ಬಂದನ
ಆವ ಪಳ್ಳಿಲಿ ನಿಂದನ।
 ಮಾವಕಂಸನ ಕೊಂದನ
ಕಾವನಯ್ಯ ಮುಕುಂದನ ॥ 2 ॥

 ದೇವಕಿಯ ಜಠರದಲಿ ಬಂದನ = ದೇವಕಿಯನ್ನು ನಿಮಿತ್ತಮಾಡಿಕೊಂಡು, ಸ್ವೇಚ್ಛೆಯಿಂದ ಪ್ರಕಟನಾದ ( ಆದರೂ, ದೇವಕಿಯಲ್ಲಿ ಲೋಕಸಿದ್ಧಗರ್ಭಿಣಿಯರ ಚಿನ್ಹೆಗಳನ್ನುಂಟುಮಾಡಿ, ಅಜ್ಞಾನಿಗಳಿಗೆ ಸಾಮಾನ್ಯರಂತೆ ಹುಟ್ಟಿದವನೆಂಬ ಮೋಹವನ್ನುಂಟುಮಾಡಿದ ) ಶ್ರೀಕೃಷ್ಣ; ಆವ ಪಳ್ಳಿಲಿ ನಿಂದನ = ( ದೇವಕಿಯಲ್ಲಿ ಜನಿಸಿ ) ಗೋಕುಲದಲ್ಲಿ -  ಗೊಲ್ಲರ ಹಟ್ಟಿಯಲ್ಲಿ ಸೇರಿ , ಅಲ್ಲಿ ಬಾಲ್ಯಾವಸ್ಥೆಯನ್ನು ಕಳೆದನು; ಕಾವನಯ್ಯ = ರಕ್ಷಿಸುವ ತಂದೆ.

 ಪೂರ್ಣಪ್ರಜ್ಞರಿಗೊಲಿದು ದ್ವಾರಕಾ -
ಮಣ್ಣಿನೊಳು ಪ್ರಕಟಿಸಿದನ ಭ -
 ವಾರ್ಣವಕೆ ಪ್ಲವನಾದನ ಪ್ರ -
ಸನ್ನವೇಂಕಟಕೃಷ್ಣನ ॥ 3 ॥

 ಪೂರ್ಣಪ್ರಜ್ಞರಿಗೆ = ಶ್ರೀಮದಾಚಾರ್ಯರಿಗೆ ; ದ್ವಾರಕಾಮಣ್ಣಿನೊಳು = ಗೋಪೀಚಂದನದ ಗಡ್ಡೆಯಲ್ಲಿ (ಬಿರುಗಾಳಿಗೆ ಸಿಕ್ಕಿದ ಅಪಾಯದಿಂದ ವರ್ತಕನ ಹಡಗನ್ನು ಶಾಟಿಯ ವಾಯುವಿನಿಂದ ರಕ್ಷಿಸಿ , ಬದುಕಿ ಬಂದ ವರ್ತಕನು ಸರ್ವಸಮರ್ಪಣೆ ಮಾಡಿದರೂ, ಕೇವಲ ಗೋಪೀಚಂದನಗಡ್ಡೆಗಳನ್ನು ಮಾತ್ರ ಸ್ವೀಕರಿಸಿದ, ಶ್ರೀಮಧ್ವಚಾರ್ಯರ ಲೀಲೆಯು ಜನಜನಿತವಾಗಿದೆ; ಒಂದು ಗಡ್ಡೆಯಲ್ಲಿದ್ದ ಶ್ರೀಕೃಷ್ಣನನ್ನೇ ಉಡುಪಿಯಲ್ಲಿ ಪ್ರತಿಷ್ಠಿಸಿದರು) ; ಭವಾರ್ಣವಕೆ = ಸಂಸಾರಸಾಗರವನ್ನು ದಾಟಲಿಕ್ಕೆ; ಪ್ಲವನಾದ = ನಾವೆಯಂತಿರುವ ( ಶ್ರೀಕೃಷ್ಣನನ್ನು ).

 ಸಂಪಾದಕರು :
ಹರಿದಾಸರತ್ನಂ ಶ್ರೀ ಗೋಪಾಲದಾಸರು