Showing posts with label ನರಹರಿಯನು ನೆರೆನಂಬಿದೆನು ನಾನು ಕರುಣಾವಾರಿಧೆ hanumesha vittala. Show all posts
Showing posts with label ನರಹರಿಯನು ನೆರೆನಂಬಿದೆನು ನಾನು ಕರುಣಾವಾರಿಧೆ hanumesha vittala. Show all posts

Tuesday 1 June 2021

ನರಹರಿಯನು ನೆರೆನಂಬಿದೆನು ನಾನು ಕರುಣಾವಾರಿಧೆ ankita hanumesha vittala

 ಆತ್ಮನಿವೇದನೆ

ನರಹರಿಯನು ನೆರೆನಂಬಿದೆನು ನಾನು ಕರುಣಾವಾರಿಧೆ

ಪಾಲಿಸಯ್ಯಾ ಪ


ದುರಿತ ಸಾಗರದಿ ಬಿದ್ದಿರುವೆ ನೀ ಮರೆಯದೆ ತ್ವರದಿ ದಾಟಿಸೋ

ಎನ್ನ ಜೀಯಾ ಅ.ಪ.


ಸ್ನಾನಕ್ಕೆ ಮೈಛಳಿಯಾಯ್ತೋ ಧ್ಯಾನಕ್ಕೆ ಮರುವಾಯ್ತೋ

ದಾನಕ್ಕೆ ಲೋಭ ಅಡ್ಡಾಯಿತೋ

ಮಾನಕ್ಕೆ ಕೋಪಬೀಜವಂಕುರಿಸಿತೋ ಶ್ವಾನನಂದದಿ ಬಾಳಾಯ್ತೋ 1


ಬಲೆಯ ಕಾಣದೇ ಮೃಗ ಫಲಮೆಲುವುದಕ್ಹೋಗಿ

ತಲೆ ಸಿಕ್ಕುತೊಳಲುವ ತೆರದಿ

ಕುಲವೃಕ್ಷ ಕೊನೆಗಿದ್ದ ಫಲದಾಸೆಗೆ ಮಾಯಾ ಬಲೆಯೊಳು

ಬಿದ್ದೆನೊ ಭರದಿ 2


ನರನಾದ ಕುರಿ ನಾನು ಪೊರೆಯುವ ಧೊರೆ ನೀನು

ದುರಿತವ ತರಿದು ಕಾಪಾಡೋ

ವರದ ಶ್ರೀ ಹನುಮೇಶವಿಠಲನೆ ನಿನಗೆ ನಾ ಶರಣಾದೆ

ಕರವ ಬಿಡಬ್ಯಾಡೊ 3

****