Showing posts with label ಳಳ- RSS- ಸಂಘದ ಸಸಿಯಿದು others SANGHADA SASIYIDU rss. Show all posts
Showing posts with label ಳಳ- RSS- ಸಂಘದ ಸಸಿಯಿದು others SANGHADA SASIYIDU rss. Show all posts

Friday 24 December 2021

ಸಂಘದ ಸಸಿಯಿದು others SANGHADA SASIYIDU rss



RSS song

ಸಂಘದ ಸಸಿಯಿದು ಹೆಮ್ಮರವಾಗಿದೆ

ಕೇಶವ ನೀನೇ ನೋಡಲು ಬಾ

ಟೊಂಗೆ ಟೊಂಗೆಯಲು ಕಂಗೊಳಿಸುತಲಿಹ

ಅಮೃತ ಫಲಗಳ ನೀಡಲು ಬಾ ||ಪ||


ಮೋಹಿತೆವಾಡದ ಅಂಗಳದಲ್ಲಿ ನೀನೇ ನೆಟ್ಟಿಹ ಸಸಿಯಂದು

ಬೆಳೆಯಿತು ಭರದಲಿ ಬೆಳೆಯುತಲಿಹುದು ಅಗಣಿತ ಶಾಖೆಗಳೈತಂದು

ಬೆಂಗಾಡನು ರಂಗೇರಿಸಿ ಬೀಸಿತು ನವಚೈತ್ಯನ್ಯದ ತಂಗಾಳಿ

ದೈನ್ಯ ನಿರಾಶೆಯ ಕಾಲವು ಕಳೆಯಿತು ಮೈಮರೆವಿನ ಪೊರೆಯನು ಸೀಳಿ ||೧||


ಅನುದಿನ ನೀರನು ಉಣಿಸುತ ನೀನು, ಜತನದಿ ಪೋಷಣೆ ಮಾಡಿರುವೆ

ದೂಷಣೆ ಪ್ರತಿರೋಧದ ಝಳದಿಂದ ಛಲದಿಂದಲಿ ಕಾಪಾಡಿರುವೆ

ಕಿರುಸಸಿಯಿದು ತರುವಾಗುತಲಿಂದು ತರುಣಾವಸ್ಥೆಯ ತಲುಪಿಹುದು

ಸಾಸಿರ ಸಾಸಿರ ಶಾಖೆಯನಾಂತು ನಾಡಿಗೆ ನೆರಳೀಯುತಲಿಹುದು ||೨||


ಎಲೆಗಳ ಮರೆಯಲಿ ನಸುನಗುತಿರುವ, ಪುಷ್ಪಗಳೆನಿತೋ ಕೇಶವನೆ

ಆ ಸುಮರಾಶಿಯು ಸೂಸಿಹ ಸೌರಭ, ಆವರಿಸಿಹುದೀ ದೇಶವನೇ

ಒಡಲೊಳು ಅಡಗಿದೆ ನಾಡಿಗೆ ನೀಡಲು ತಾಯ್ನೆಲದೊಲವಿನ ಮಕರಂದ

ಕಸವನು ರಸಮಯಗೊಳಿಸುತ ಸಾಗಿದೆ ಭಾರತದೇಶದ ಯುವವೃಂದ ||೩||

***

saMGada sasiyidu hemmaravAgide

kESava nInE nODalu bA

ToMge ToMgeyalu kaMgoLisutaliha

amRuta PalagaLa nIDalu bA ||pa||


mOhitevADada aMgaLadalli nInE neTTiha sasiyaMdu

beLeyitu Baradali beLeyutalihudu agaNita SAKegaLaitaMdu

beMgADanu raMgErisi bIsitu navacaityanyada taMgALi

dainya nirASeya kAlavu kaLeyitu maimarevina poreyanu sILi ||1||


anudina nIranu uNisuta nInu, jatanadi pOShaNe mADiruve

dUShaNe pratirOdhada JaLadiMda CaladiMdali kApADiruve

kirusasiyidu taruvAgutaliMdu taruNAvastheya talupihudu

sAsira sAsira SAKeyanAMtu nADige neraLIyutalihudu ||2||


elegaLa mareyali nasunagutiruva, puShpagaLenitO kESavane

A sumarASiyu sUsiha souraBa, AvarisihudI dESavanE

oDaloLu aDagide nADige nIDalu tAyneladolavina makaraMda

kasavanu rasamayagoLisuta sAgide BAratadESada yuvavRuMda ||3||

***

ಸಂಘದ ಸಸಿಯಿದು ಹೆಮ್ಮರವಾಗಿದೆ

ಕೇಶವ ನೀನೇ ನೋಡಲು ಬಾ

ಟೊಂಗೆ ಟೊಂಗೆಯಲು ಕಂಗೊಳಿಸುತಲಿಹ
ಅಮೃತ ಫಲಗಳ ನೀಡಲು ಬಾ ||ಪ||

ಮೋಹಿತೆವಾಡದ ಅಂಗಳದಲ್ಲಿ ನೀನೇ ನೆಟ್ಟಿಹ ಸಸಿಯಂದು
ಬೆಳೆಯಿತು ಭರದಲಿ ಬೆಳೆಯುತಲಿಹುದು ಅಗಣಿತ ಶಾಖೆಗಳೈತಂದು
ಬೆಂಗಾಡನು ರಂಗೇರಿಸಿ ಬೀಸಿತು ನವಚೈತ್ಯನ್ಯದ ತಂಗಾಳಿ
ದೈನ್ಯ ನಿರಾಶೆಯ ಕಾಲವು ಕಳೆಯಿತು ಮೈಮರೆವಿನ ಪೊರೆಯನು ಸೀಳಿ ||೧||

ಅನುದಿನ ನೀರನು ಉಣಿಸುತ ನೀನು, ಜತನದಿ ಪೋಷಣೆ ಮಾಡಿರುವೆ
ದೂಷಣೆ ಪ್ರತಿರೋಧದ ಝಳದಿಂದ ಛಲದಿಂದಲಿ ಕಾಪಾಡಿರುವೆ
ಕಿರುಸಸಿಯಿದು ತರುವಾಗುತಲಿಂದು ತರುಣಾವಸ್ಥೆಯ ತಲುಪಿಹುದು
ಸಾಸಿರ ಸಾಸಿರ ಶಾಖೆಯನಾಂತು ನಾಡಿಗೆ ನೆರಳೀಯುತಲಿಹುದು ||೨||

ಎಲೆಗಳ ಮರೆಯಲಿ ನಸುನಗುತಿರುವ, ಪುಷ್ಪಗಳೆನಿತೋ ಕೇಶವನೆ
ಆ ಸುಮರಾಶಿಯು ಸೂಸಿಹ ಸೌರಭ, ಆವರಿಸಿಹುದೀ ದೇಶವನೇ
ಒಡಲೊಳು ಅಡಗಿದೆ ನಾಡಿಗೆ ನೀಡಲು ತಾಯ್ನೆಲದೊಲವಿನ ಮಕರಂದ
ಕಸವನು ರಸಮಯಗೊಳಿಸುತ ಸಾಗಿದೆ ಭಾರತದೇಶದ ಯುವವೃಂದ ||೩||
***